ತಮ್ಮನನ್ನು ಉಳಿಸಲು ಹೋದ ಮೂರು ಅಕ್ಕಂದಿರು ನೀರುಪಾಲು ಹೃದಯವಿದ್ರಾವಕ ಘಟನೆ | JANATA NEWS
ವಿಜಯನಗರ : ನೀರಿನಲ್ಲಿ ಬಿದ್ದ ತಮ್ಮನನ್ನು ಕಾಪಾಡಲು ಹೋದ ಮೂವರು ಅಕ್ಕಂದಿರು ತಮ್ಮನ ಸಮೇತ ಜಲಸಮಾಧಿಯಾದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ನಾಲ್ಕೂ ಮಕ್ಕಳು ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಹರಪನಹಳ್ಳಿ ತಾಲೂಕಿನ ಚನ್ನಹಳ್ಳಿತಾಂಡದಲ್ಲಿ ಈ ದುರ್ಘಟನೆ ನಡೆದಿದೆ. ಅಭಿ ನಾಯ್ಕ(13), ಅಶ್ವಿನಿ(14), ಕಾವೇರಿ (17) ಮತ್ತು ಅಪೂರ್ವಾ (17) ಮೃತ ದುರ್ದೈವಿಗಳು. ಇತ್ತೀಚಿಗೆ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಕೆರೆ, ಹಳ್ಳ, ಹೊಂಡಗಳು ತುಂಬಿವೆ.
ಮೃತರು ಬಟ್ಟೆ ತೊಳೆಯಲು ಬುಧವಾರ ಚನ್ನಹಳ್ಳಿ ತಾಂಡದ ಸಮೀಪದಲ್ಲಿರುವ ಗೋಕಟ್ಟೆಗೆ ತೆರಳಿದ್ದಾರೆ ಆ ಸಂದರ್ಭದಲ್ಲಿ ಮೊದಲಿಗೆ ಅಭಿಷೇಕ್ ಎಂಬುವರು ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿದ್ದಾನೆ. ಇದನ್ನು ನೋಡಿದ ಮೂವರು ಅಕ್ಕಂದಿರೂ ತಮ್ಮನನ್ನು ರಕ್ಷಿಸಲು ಹೋಗಿ ದುರಂತ ಅಂತ್ಯ ಕಂಡಿದ್ದಾರೆ.
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹರಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.